Skip to main content

ಹಿರೇಕುಂಬಳಗುಂಟೆಯ ಹಾಲಸ್ವಾಮಿಜೀ ಮಠದ 16ನೇ ವರ್ಷದ ಜಾತ್ರ ಮಹೋತ್ಸವ ಕಾರ್ಯಕ್ರಮ-2021

ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ
ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ,

|| ಶ್ರೀ ಗುರುಹಾಲಶಂಕರ ಪ್ರಸೀದಂತು ||

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 16ನೇ ವರ್ಷದ ಜಾತ್ರಾ ಮಹೋತ್ಸವದ

"ಆಹ್ವಾನ ಪತ್ರಿಕೆ”

ದಿನಾಂಕ:- 28-12-2021 ನೇ ಮಂಗಳವಾರ ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ
ದಿನಾಂಕ:- 29-12-2021 ನೇ ಬುಧವಾರ ಬೆಳಗ್ಗೆ
ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಭಿಷೇಕ: ಗ್ರಾಮದ ಸಕಲ ಸದ್ಧಕ್ತರಿಂದ ನೆರವೇರುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಗು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ:- 30-12-2021 ನೇ ಗುರುವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ರವಿಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಬಿನ್ನ ಮತ್ತು ತೇಜಿಬಿನ್ನ ತದನಂತರ ಸಾಯಂಕಾಲ 4-00 ಗಂಟೆಗೆ

ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು.

* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತನ ಗ್ರಾಮಗಳ ಸಮಸ್ತ ಸದ್ಧಕ್ತರಿಂದ ನೆರವೇರುವುದು.
* ಭಕ್ತಾದಿಗಳಲ್ಲಿ ವಿನಂತಿಸುವುದೇನೆಂದರೆ ಮಾಸ್ಕ್ ಧರಿಸಿ
ಸಾಮಾಜಿಕ ಅಂತರವನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳಿ.

* ಸರ್ವರಿಗೂ ಆದರದ ಸ್ವಾಗತ *

www.facebook.com/amrutheshwarasri www.fb.com/mounarushi www.hirekumbalgunte.blogspot.com
ಈ ವರ್ಷದ "ಹಾಲಪ್ಪಜ್ಜನ ಜಾತ್ರೆ"ಯ ಮೊದಲ ದಿನದ ದೀಪೋತ್ಸವ-ಕಾರ್ತೀಕದ ಸಂದರ್ಭದಲ್ಲಿ ಆರೋಗ್ಯಕ್ಷೇತ್ರದಲ್ಲಿ ನಿಃಸ್ವಾರ್ಥದಿಂದ ಸೇವೆ ಸಲ್ಲಿಸಿದ ಆಲೂರು PHC ಯ ಡಾ||ಪ್ರಸನ್ನ ಕುಮಾರ್,ರವಿಯಣ್ಣ(FDA),ಕಲ್ಲೇಶಣ್ಣ(Lab Technician)ರಿಗೂ ಹಾಗೂ ಈ ಹಿಂದೆ ಹಲವಾರು ವರ್ಷಗಳ ಕಾಲ ಊರ ಮಗಳಂತೆ ಸೇವೆ ಸಲ್ಲಿಸಿದ್ದ ಪ್ರೀತಿಯ 'ಗುಂಡಮ್ಮಕ್ಕ'(ANM,ಶಿರಾ)ರಿಗೂ ಗುರು ರಕ್ಷೆಯ ಸತ್ಕಾರ ಮಾಡಲಾಗುತ್ತಿದೆ.
       ಗುರು ರಕ್ಷಾ ಕಾರ್ಯಕ್ರಮದ ನಂತರ ಜನಪ್ರಿಯ ಹಾಸ್ಯ ಭಾಷಣಕಾರರಾದ ಕೋಗಳಿ ಕೊಟ್ರೇಶ್ & ತಂಡದವರ "ಹಾಸ್ಯ ರಸಾಯನ" ವು ಜನರನ್ನು ನಗಿಸುವ,ನಗಿಸುತ್ತಲೇ ಜೀವನ ಸಂದೇಶವನ್ನೂ ದಾಟಿಸಲಿದೆ.
                  'ಪುಸ್ತಕ ಮನೆ'ಯಲ್ಲಿ ಹೊಸದಾಗಿ 'ಕಂಪ್ಯೂಟರ್‌ ತರಬೇತಿ'ಕಾರ್ಯಕ್ರಮದ ಉದ್ಘಾಟನೆಯು ಮುಳ್ಳುಗದ್ದುಗೆಯ ದಿನದ ಬೆಳಿಗ್ಗೆ ನೆರವೇರಲಿದೆ.
ಈ ವರ್ಷದ ಅನ್ನ ದಾಸೋಹವು 'ಪುಸ್ತಕ ಮನೆ'ಯ ಆವರಣದಲ್ಲಿ ಡಾ||ಎಚ್.ಎಂ.ಮರುಳಸಿದ್ಧಯ್ಯ ಬಳಗದ ವತಿಯಿಂದ ಸಂಪನ್ನಗೊಳ್ಳಲಿದೆ.
ಮತ್ತೆ...ನೀವು ಬರೋದು ಮಾತ್ರವೇ ಬಾಕಿ ಇದೆ. ಪದೇ ಪದೇ ಕರೆಸಿಕೊಳ್ಳದೇ ಬಂದು ಬಿಡ್ರೆಲಾ..

ತೇರನ್ನೇನೋ ಎಳೆದು ನೆಲೆಗೆ ನಿಲ್ಲಿಸಲಾಗಿದೆ.ಅದು ಹುಟ್ಟು ಹಾಕಿದ ಮನಸ್ಸಿನ ತಲ್ಲಣದ ಮೆರವಣಿಗೆ ಮಾತ್ರ ಇನ್ನೂ ನಡೆಯುತ್ತಲೇ ಇದೆ!
"ಹಾಲಪ್ಪಜ್ಜನ ಜಾತ್ರೆ" ಯು ಸಂಸ್ಕೃತಿ,ಸಹಬಾಳ್ವೆ , ಸಮೈಕ್ಯತೆಗಳ ಸಂಭ್ರಮವಾಗಿತ್ತಾ? - ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲಿಲ್ಲ.

ಎಳೆಯ ವಯಸ್ಸಿನ ಹುಡುಗರೆಲ್ಲಾ ಕುಡಿದು,ತೂರಾಡುತ್ತ ಕುಣಿದದ್ದು ಸಂಸ್ಕೃತಿಯಾ? ಎಲ್ಲಿ ನೋಡಿದರೂ ಬರೀ ಕುಡುಕರದ್ದೇ ಜಾತ್ರೆ!
ಜಾತಿ ವೈಷಮ್ಯದ ಹೊಗೆಯು ಆವಾಗವಾಗ ಎದ್ದು ಉರಿದದ್ದು ಅದೆಂಥಾ ಸಹಬಾಳ್ವೆ?
ಉಳ್ಳವರಿಗೊಂದು-ಇಲ್ಲದವರಿಗೊಂದು ಬಗೆವ ಈ ಜಾತ್ರೆಯಲ್ಲಿದ್ದದ್ದು ಅದೆಂಥಾ ಸಮೈಕ್ಯತೆ? 
ಆರತಿ ಹಿಡಿದವರ ಸಾಲಲ್ಲಿ ಹಳೆಯದೊಂದು ಸೀರೆಯುಟ್ಟು ಮುದುಡಿ ಕುಳಿತಿದ್ದ ಆ ಬಡಬಾಲೆಯ ಕಣ್ಣನೋಟ...
ಗುಡಿಯೊಳಗೆ ಹೋಗಲಾಗದೆ,ಹೊರಗೆಯೇ ಕೈಮುಗಿದು ಕಣ್ಣಲ್ಲಿ ತೊಟ್ಟಿಕ್ಕಿದ ಕಂಬನಿ ಹನಿಗಳನ್ನೊರೆಸಿಕೊಂಡ ತಳಜಾತಿಯ ಆ ತಾಯಿಯೊಬ್ಬಳ ನಿಟ್ಟುಸಿರು...
ಬಳೆಯಂಗಡಿಯು ಮುಂದೆ ಬರಿಗೈಲಿ ಬಳೆಗಳೆಡೆ ನೋಡುತ್ತ ನಿಂತ ಆ ಸಣ್ಣ ಹುಡುಗಿಯೊಬ್ಬಳ ಎದೆಯ ಕುದಿ...

ದೇಹ-ಮನಸ್ಸುಗಳೆರಡೂ ದಣಿವು,ಜಿಗುಪ್ಸೆಗಳಿಂದ ಕದಡಿ ಹೋಗಿಬಿಟ್ಟಿದೆ.
I wouldn't let myself get into this again..No NOMORE .. NEVER! -
-  ಜಿಎಂ ನಾಗರಾಜ್


ಹಿರೇಕುಂಬಳಗುಂಟೆ ಹಾಲಸ್ವಾಮಿ ರಥೋತ್ಸವ-ಮುಳ್ಳುಗದ್ದಿಗೆ ಉತ್ಸವ

Comments

Popular posts from this blog

ವಿಶ್ವಾರಾಧ್ಯರು - ವಿಶಾಲ ವಿಶ್ವಕ್ಕೆ ಆರಾಧ್ಯರಾಗಲಿ! - ನಾಗರಾಜ್ ಜಿಎಂ

"ಪಂಚಾಕ್ಷರೀ...ಕುಂಟ-ಕುರುಡರ ಕುಬೇರನಪ್ಪಾ ನೀನು!! ಅವರ ದಾರಿಯ ಬೆಳಕಾಗು..ಸಾರ್ಥಕವಾಗಲಿ ನಿನ್ನ ಬದುಕು ಗವಾಯಿ" -  ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಹಾನಗಲ್ ಕುಮಾರಸ್ವಾಮಿಗಳು ಹೇಳುತ್ತಿದ್ದರಂತೆ ಆಗಾಗ! ಈ ಮಾತು, ನಮ್ಮ ಪ.ಪೂ.ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಶ್ರೀಗಳನ್ನು ನೋಡಿದಾಗ ನೆನಪಾಗಿಬಿಡುತ್ತದೆ. ಗವಾಯಿಗಳು ಕುಂಟ-ಕುರುಡರ ಕುಬೇರರಾದರೆ, ಈ 'ಮೌನ ಋಷಿ'ಗಳು ಆಡುವ ಮಕ್ಕಳಿಗೆ ಕುಬೇರರು!! ಅವರಿದ್ದೆಡೆ‌ ಮಕ್ಕಳ ಕಲರವ. ಅವರ ತೊಡೆಯ ಮೇಲೆ ಹಾಲುಗೂಸಿನ ಕಿಲಕಿಲದ ನಗು!! ಅವರಿದ್ದೆಡೆ ಶಾಂತಿಯ ಪಾರಿವಾಳಗಳು ಹಾರಾಡುತ್ತವೆ...ತುಂಟ ಗಿಳಿಗಳು ತೊದಲಾಡುತ್ತವೆ.ನವಿಲು ಗರಿಬಿಚ್ಚಿ ಕುಣಿಯುತ್ತದೆ. ಅಯ್ಯೋ...ಅವರು ಕೂತ ಕಡೆ ತಂಗಾಳಿಯೇ ತಲೆಬಾಗಿ ಬೀಸುತ್ತದೆ. In fact ಅವರೂ ಕೂಡ ಮಗುವಿನಂಥವರು.  ಇವರಿಗೆ ವಯಸ್ಸಾಗುವುದಿಲ್ಲ..ಅವರೆಂದಿಗೂ ಬಾಲ್ಯದ ಹಸುಳೆಯ ಮನಸ್ಸು ಹೊತ್ತೇ ಬದುಕುತ್ತಾರೇನೋ ಅನಿಸುತ್ತದೆ.ಅವರು ಯಾವತ್ತೂ ಕೋಪಿಸಿಕೊಂಡದ್ದು ನೋಡಿಲ್ಲ. ಈ ಜಮಾನದ ಜನರ ಮನಃಸ್ಥಿತಿಗಳ ಅದಃಪತನವನ್ನು ನೋಡಿ, ನಮ್ಮಂಥವರಿಗೆ ರೇಜಿಗೆ ಹುಟ್ಟುತ್ತದೆ..ಆದರೆ, ಅವರು ಅಂಥವರನೆಲ್ಲಾ ನಿರ್ಲಿಪ್ತರಾಗಿ ನೋಡುತ್ತಿರುತ್ತಾರೆ. ಯಾರನ್ನೂ ದೂಷಿಸಿಸಿದ್ದನ್ನು ನಾನು ಕೇಳಿಲ್ಲ. Even ತಮ್ಮ ಬಗ್ಗೆ ಮಾತಾಡಿದವರನ್ನೂ ಕೂಡ!! ಯಾವ ಜಾತಿ-ಧರ್ಮ,ಇದ್ದವ-ಇಲ್ಲದವ ಎಂಬ ಬೇಧ ಮಾಡದೆ ಎಲ್ಲರನ್ನೂ ಅದೇ ಮೃದು ಮಾತಿನಿಂದ ಸಂತೈಸುತ್ತಾರೆ.  ವಿಶ...

Hirekumbalagunte Halaswamiji 20th Jatra Mahotsava-2025|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 20ನೇ ಜಾತ್ರ ಮಹೋತ್ಸವ-2025

ದಿನಾಂಕ: 20-11-2025 ಗುರುವಾರ ರಂದು  ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಪೂಜ್ಯರಿಗೆ ಜಾತ್ರೆಗೆ ಭಿನ್ನ ಹಾಕಿದರು. ದಿನಾಂಕ: 25-11-2025 ಮಂಗಳವಾರ ರಂದು ಶ್ರೀಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 20ನೇ ವರ್ಷದ ಜಾತ್ರಾ ಮಹೋತ್ಸವದ "ಆಹ್ವಾನ ಪತ್ರಿಕೆ" ದಿನಾಂಕ 04-12-2025 ನೇ ಗುರುವಾರ ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ  ದಿನಾಂಕ 05-12-2025 ನೇ ಶುಕ್ರವಾರ ಬೆಳಿಗ್ಗೆ ಶ್ರೀಗುರು ಹಾಲಸ್ವಾಮಿಯ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ ಶ್ರೀ ಮಠದ ಹೆಚ್.ಎಂ. ಗಂಗಾಧರಯ್ಯ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೇರವೇರುವುದು ತದನಂತರ ರಾತ್ರಿ 10-30ಕ್ಕೆ ಶ್ರೀಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೇರವೇರುವುದು. ದಿನಾಂಕ 06-12-2025 ನೇ ಶನಿವಾರ ಬೆಳಿಗ್ಗೆ 10-30 ಕ್ಕೆ ಶ್ರೀ ಹೆಚ್.ಜಿ. ಮೂಗನಗೌಡ್ರು ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ಮತ್ತು ತೇಜಿಭಿನ್ನ ತದನಂತರ  ಸಾಯಂಕಾಲ 4-00 ಗಂಟೆಗೆ  ಶ್ರೀಗುರು ಹಾಲಸ್ವಾಮಿಯ ಮಹಾರಥೋತ್ಸವ ಜರುಗುವುದು. ತದನಂತರ ರಾತ್ರಿ "ಕಲಿತಕಳ್ಳ ಸಾಮಾಜಿಕ ನಾಟಕ ಇರುತ್ತದೆ"  * ಈ ಎಲ್ಲಾ ಕಾರ್ಯಕ್ರಮಗಳು ಹಿರ...

Hirekumbalagunte Halaswamiji 19th Jatra Mahotsava-2024|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 19ನೇ ಜಾತ್ರ ಮಹೋತ್ಸವ-2024

ದಿನಾಂಕ: 4-12-2024 ರಂದು  ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಜಾತ್ರೆಗೆ ಆಹ್ವಾನ ನೀಡಿದರು. ದಿನಾಂಕ: 6-12-2024 ರಂದು ಶ್ರೀ ಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವದ "ಆಹ್ವಾನ ಪತ್ರಿಕೆ" ದಿನಾಂಕ:- 15-12-2024 ನೇ ಭಾನುವಾರ ಶ್ರೀಗುರು ಹಾಲಸ್ವಾಮಿಜೀಯ ಮಹಾಕಾರ್ತಿಕೋತ್ಸವ   ದಿನಾಂಕ: 16-12-2024 ನೇ ಸೋಮವಾರ ಬೆಳಗ್ಗೆ ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಾಭೀಷೇಕ: ಶ್ರೀ ಹೆಚ್.ಎಂ.ಗಂಗಾದಾಧರಯ್ಯ ಮತ್ತು ಶ್ರೀ ಹೆಚ್.ಎಂ.ಪ್ರಕಾಶ,ಭಾಗಳಿ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೆರವೇದುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ:- 17-12-2024 ನೇ ಮಂಗಳವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಸತೀಶ್‌ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಜನ್ನ ಮತ್ತು ತೇಜಜನ್ನ. ತದನಂತರ ಸಾಯಂಕಾಲ 4-00 ಗಂಟೆಗೆ ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು. * ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್...